ಹೋದಳುಷೆ-ಬಂತು ನಿಶೆ

ದೇವರಲ್ಲಿ ಹಸಿದನಂತೆ,
ಎನಿತಿತ್ತರು ಸಾಲದಂತೆ,
ಹಾಳುಹೊಟ್ಟೆ ಹಿಂಗದಂತೆ,
ಅದಕೆ ಜೀವ ಬಲಿಗಳಂತೆ,
ಹೋದಳುಷೆ – ಬಂತು ನಿಶೆ!

ನಾವಿಬ್ಬರು ಕೂಡಿದಾಗ,
ಎರಡು ಹೃದಯದೊಂದು ರಾಗ
ಮೋಡಿಯಿಡಲು, ಕಾಲನಾಗ
ಹರಿದು ಕಚ್ಚಿತವಳ ಬೇಗ.
ಹೋದಳುಷೆ – ಬಂತು ನಿಶೆ!

ಜೀವ ಜೀವವೊಂದುಗೂಡಿ,
ಒಲವು ನಲವು ಬೆಸೆಯೆ ಜೋಡಿ,
ಸುಖ ನಗೆಗಳ ಆಟ ಹೂಡಿ,
ಕುಣಿವೆವೆನಲು- ಕಾಲ ಕಾಡಿ,
ಹೋದಳುಷೆ – ಬಂತು ನಿಶೆ!

ಒಲವ ರಾಸಿ, ರೂಪ ಬಲುಮೆ,
ನನ್ನ ಹೃದಯದಲ್ಲ ಹಿರಿಮೆ,
ನಾಡಿ ನಾಡಿಯೊಳಗ ನುಡಿಮೆ
ನಲ್ಮೆ ನವಿಲು, ಚೆಲುವ ಚಿಲುಮೆ
ಹೋದಳುಷೆ – ಬಂತು ನಿಶೆ!

ಹೊಸ ಹರಯದ ಹೊಸಲಿನ ದೆಸೆ
ನಾಳೆ ನಲಿವ ಜೀವದಾಸೆ
ಮೊಗ್ಗಿನಲ್ಲಿ ಮುಕ್ಕಾಗಿಸೆ
ನನ್ನುಷೆಗಿನ್ನೆಲ್ಲಿ ಉಷೆ ?
ಹೋದಳುಷೆ – ಬಂತು ನಿಶೆ!

ಸೂರೆಗೊಂಡರೆದೆಯ ಸಂತೆ !
ಉಳಿದುದಲ್ಲಿ ಶೂನ್ಯ ಬೊಂತೆ.
ನಾಳೆ ಬಾಳು ಅಂತೆ ಕಂತೆ.
ನಾನುಳಿಯುವ ಜಗವಿದಂತೆ !
ಕತ್ತಲೆಲ್ಲ,
ಕಿರಣವಿಲ್ಲ;
ಇದೆ ಒಲವಿನ ಹಾದಿಯಂತೆ !
ಹೋದಳುಷೆ – ಬಂತು ನಿಶೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮನಗರಿಯಲ್ಲಿ ಮದುವೆ
Next post ಹಳದಿ ಹೂ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys